ಮೇಘ ಮೂವೀಸ್ ಲಾಂಛನದಲ್ಲಿ ರವೀಂದ್ರ ಅವರು ನಿರ್ಮಿಸಿರುವ ‘ಕಿರಗೂರಿನ ಗಯ್ಯಾಳಿಗಳು ಚಿತ್ರ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಕಥೆ ಆಧಾರಿತವಾಗಿದೆ. ಚಿತ್ರ ಸದ್ಯದಲ್ಲೇ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಚಿತ್ರದ ಕುರಿತು ಚಿತ್ರತಂಡ ಚಿಕ್ಕಮಗಳೂರಿನಲ್ಲಿ ಪತ್ರಿಕಾಗೋಷ್ಠಿಯನ್ನು ಆಯೋಜಿಸಿದ್ದರು. ಅಂದಿನ ಗೋಷ್ಠಿಯಲ್ಲಿ ಭಾಗವಹಿಸಿದ್ದ ಶ್ರೀ ಪೂರ್ಣಚಂದ್ರ ತೇಜಸ್ವಿ ಅವರ ಮಡದಿ ಶ್ರೀಮತಿ ರಾಜೇಶ್ವರಿ ತೇಜಸ್ವಿ ಅವರು ‘ಕಿರಗೂರಿನ ಗಯ್ಯಾಳಿಗಳು ಚಿತ್ರಕ್ಕೆ ಶುಭ ಕೋರಿದರು ಹಾಗೂ ನಿರ್ದೇಶಕಿ ಸುಮನ ಕಿತ್ತೂರು ಅವರ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದರು.
‘ಕಿರಗೂರಿನ ಗಯ್ಯಾಳಿಗಳು ಚಿತ್ರಕ್ಕೆ ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಅಗ್ನಿ ಶ್ರೀಧರ್ ಮತ್ತು ಸುಮನ ಕಿತ್ತೂರು ಬರೆದಿದ್ದಾರೆ. ಸಾಧುಕೋಕಿಲ ಅವರು ಹಿನ್ನಲೆ ಸಂಗೀತ ನೀಡಿರುವ ಈ ಚಿತ್ರಕ್ಕೆ ಮನೋಹರ್ ಜೋಶಿ ಅವರ ಛಾಯಾಗ್ರಹಣಹಾಗೂ ಸುರೇಶ್ ಅರಸ್ ಅವರ ಸಂಕಲನವಿದೆ.
ಶ್ವೇತ ಶ್ರೀವಾಸ್ತವ್, ಯೋಗೀಶ್(ಲೂಸ್ಮಾದ), ಅಜಯ್ರಾವ್, ಕಿಶೋರ್, ಸುಕೃತ ವಾಗ್ಲೆ, ಸೋನು ಗೌಡ, ಕಾರುಣ್ಯರಾಮ್, ಅಚ್ಯುತಕುಮಾರ್, ಶರತ್ ಲೋಹಿತಾಶ್ವ, ಸುಂದರ್, ಎಸ್.ನಾರಾಯಣ್, ಗಿರಿಜಾ ಲೋಕೇಶ್, ಲಕ್ಷ್ಮೀಚಂದ್ರಶೇಖರ್, ರವಿಶಂಕರ್ ಗೌಡ, ಅನಂತವೇಲು, ರಾಹುಲ್ ಮಾಧವನ್, ನಿಖಿಲ್ ಮಂಜು, ಶಾಂತ ಆಚಾರ್ಯ, ಶೊಭ್ರಾಜ್, ಮಂಡ್ಯ ರಮೇಶ್, ಧರ್ಮ, ಕೆ.ಎಸ್.ಡಿ.ಎಲ್ ಚಂದ್ರು, ಸಂಪತ್ಕುಮಾರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.